ಮನೆ

ಭೂಮಿ ಮೇಲೆ ಅದೆಷ್ಟು
ಜಾತಿ ಮತ ಧರ್ಮಗಳ ಹಗೆತನ
ಕೊಲೆ ಭಯೋತ್ಪಾದನೆಗಳ ಅಟ್ಟಹಾಸ.
ಆಕಾಶ ಮಾರ್ಗ ಅದೆಷ್ಟು ಹೊಚ್ಚ ಹೊಸತನ
ಬಾನಂಗಳ ಅದೆಷ್ಟು ಸುಂದರ
ನನ್ನ ಕಿಡಕಿಯಾಚೆ ಅದೇನು ನಯನಮನೋಹರ
ಇಲ್ಲೊಂದು ಪುಟ್ಟ ಮನೆ ಕಟ್ಟುವಾಸೆ.
ಕಲ್ಲು ಮಣ್ಣಿನ ಇಟ್ಟಿಗೆ ಸಿಮೆಂಟಿನ
ಮನೆ ಬೇಡ-
ಅದಕೆ ಬಾಗಿಲು, ಕಿಟಕಿ, ಕೋಣೆ, ಬಾಲ್ಕನಿ ಎನುತ
ತಲೆ ಕೆಡಿಸಿಕೊಳ್ಳುವುದು ಬೇಡ
ಕಟ್ಟಿಗೆ ಹುಲ್ಲು ಹೊದಿಕೆಯ
ಗುಡಿಸಲವೂ ಬೇಡ-
ಭದ್ರತೆಗೆ ನಾಯಿ ನರಿ
ಆಳು ಕಾಳುಗಳೇನೂ ಬೇಡವೇಬೇಡ

ಇದ್ದೂ ಇಲ್ಲದಂತಿರುವ
ಇಲ್ಲದೆಯೂ ಇದ್ದಂತಿರುವ
ಶುದ್ಧ ಪರಿಶುದ್ಧ ಮೋಡಿನಾ ಹಂಜಿ ಹಿಂಜಿ
ನಿರ್ಭೀತಿಯ ಮನೆ ಕಟ್ಟಿ ಆಕಾಶದಲೆಗಳ ನಡುವೆ
ಗಾಳಿ ಬೆಳಕಿನಾ ಆಹಾರ ಸೇವಿಸುತಾ
ಕರಿಗಿಬಿಡಬೇಕೀ ಮನೆಯಲ್ಲೇ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಾದಿ
Next post ಪ್ರಶ್ನೆ ಉತ್ತರ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys